ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಹೊಡಕಹಳ್ಳಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ನೆಡೆಯಿತು.
ಕಾರ್ಯಕ್ರಮವನ್ನು ಸಂಘದ ಅದ್ಯಕ್ಷೆಯಾದ ರತ್ನಮ್ಮ ಮಂಜುನಾಥ್ ಉದ್ಘಾಟಿಸಿ ಮಾತನಾಡಿ ನಮ್ಮ ಸಹಕಾರ ಸಂಘವು ಕಳೆದ ನಾಲ್ಕು ವರ್ಷದ ಇಂದೆ ಪ್ರಾರಂಭವಾಗಿ ಇಂದು ಎರಡು ಲಕ್ಷ ಆದಾಯದತ್ತ ಕಾಲಿಟ್ಟಿದೆ ನಮ್ಮ ಸಂಘಕ್ಕೆ ಸ್ವಂತ ಕಟ್ಟದ ಸಮಸ್ಯೆ ಇದ್ದು ಶೇರುದಾರ ಸಹಕಾರದೊಂದಿಗೆ ಶ್ರೀಘ್ರದಲ್ಲೆ ಸ್ವಂತ ಕಟ್ಡಡ ನಿರ್ಮಿಸಲು ಎಲ್ಲರೂ ಶ್ರಮಿಸೂಣ ಎಂದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಉಪಾದ್ಯಕ್ಷೆ ಪುಟ್ಟಮ್ಮ ಚಂದ್ರು, ನಿರ್ದೇಶಕರಾದ ಲಕ್ಷ್ಮಮ್ಮ ಮಂಜೇಗೌಡ, ಸಾವಿತ್ರಮ್ಮ ಕೋಟೇಗೌಡ, ಸವಿತಾ ಮಂಜುನಾಥ್,ಕಮಲಮ್ಮ ಕೃಷ್ಣೇಗೌಡ, ನಾಗಮ್ಮ ತಿಮ್ಮೇಗೌಡ, ರಾದಮ್ಮ ಗೋಪಾಲ್, ಪಾರ್ವತಿ ದರ್ಮೇಶ್, ಪಾರ್ವತಮ್ಮ ಉಗ್ರಯ್ಯ, ಕಾರ್ಯದರ್ಶಿಯಾದ ಕುಮಾರಿ ಪುನೀತ್, ಸಹಾಯಕಿ ಶಾಂತಮ್ಮ ಮಹದೇವು ಮತ್ತು ಗ್ರಾಮಸ್ಥರು ಇದ್ದರು.


