Ticker

6/recent/ticker-posts

ಹಾಸನ: ಸ್ವಚ್ಛ ಸಮಾಜ ನಿರ್ಮಾಣ‌ ಮಾಡಲು ಶಕ್ತಿ ಮೀರಿ ನಿತ್ಯ ದುಡಿಯುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರು ಪ್ರೀತಿ, ವಿಶ್ವಾಸ ಹಾಗೂ‌ ಗೌರವದಿಂದ ಕಾಣಬೇಕು ಎಂದು ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದರು.



   ನಗರದ ನಗರಸಭೆ ಸಂಭಾಗಣದಲ್ಲಿ ಪೌರ ಸೇವಾ ನೌಕರರ ಸೇವಾ ಸಂಘ, ಪೌರಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ  ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ಪೌರಕಾರ್ಮಿಕರು ಎಂದರೆ ಎಲ್ಲರು  ಮೂಗು ಮುರಿಯುವ ಕೆಲಸ ಬಿಡಬೇಕು.
ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣವಾಗಬೇಕಾದರೆ ಅವರ ಶ್ರಮ ಅತ್ಯಮೂಲ್ಯವಾಗಿದೆ ಎಂದರು
 ಈಗಾಗಲೇ ‌ಅನೇಕ ಪೌರ‌ಕಾರ್ಮಿಕರಿಗೆ ‌ಮನೆ ನಿರ್ಮಾಣಕ್ಕೆ ಮುಂದಾಗಿದ್ದು ಇನ್ನು ಸುಮಾರು ‌೪೦  ಜನರಿಗೆ ‌ನಿವೇಶನ ನೀಡಲು ಭೂಮಿ ತಕರಾರು ಇದೆ. ಅದನ್ನು ‌ಶೀಘ್ರದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ‌ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
 ಪೌರಕಾರ್ಮಿಕರು‌ ನಗರ‌‌ ಸ್ವಚ್ಛತೆ  ಜೊತೆಗೆ ಆರೋಗ್ಯದ ಕಡೆಗೂ ಗಮನಹರಿಸಬೇಕಾಗಿದೆ. ಇವರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲ ಸದಸ್ಯರನ್ನು  ವಿಶ್ವಾಸಕ್ಕೆ ಪಡೆದು   ಪೌರಕಾರ್ಮಿಕರಿಗೆ ಆರೋಗ್ಯ ವಿಮೆ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಸಂಸದ  ಪ್ರಜ್ವಲ್ ರೇವಣ್ಣ ಮಾತನಾಡಿ, ಹಾಸನ ನಗರ ಸ್ವಚ್ಛ ‌ನಗರ  ಎಂಬ ಹೆಗ್ಗಳಿಕೆ ಪಾತ್ರವಾಗಲು ಪೌರಕಾರ್ಮಿಕರ ಶ್ರಮವೇ ಮುಖ್ಯವಾಗಿದೆ ಎಂದು ಹೇಳಿದರು. 
 ಬಿಜೆಪಿ‌ ಸರ್ಕಾರ  ಅಧಿಕಾರಕ್ಕೆ‌ ಬಂದ‌ ಮೇಲೆ ಹೊರಗುತ್ತಿಗೆಯಲ್ಲಿ ಕೆಲಸ‌ ಮಾಡುತ್ತಿದ್ದ‌  ಪೌರಕಾರ್ಮಿಕರನ್ನು  ಕೆಲಸದಿಂದ ವಜಾಗೊಳಿಸಿರುವ ಕಾರಣ ಅನೇಕ ಕುಟುಂಬಗಳು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸರ್ಕಾರ ಮತ್ತೆ ಅವರನ್ನು ನೇಮಕ ಮಾಡಿಕೊಂಡು ಶಕ್ತಿತುಂಬುವ ಕೆಲಸ‌ಮಾಡಬೇಕು ಎಂದು‌ ಮನವಿ‌ ಮಾಡಿದರು.
ಹಾಸನ‌‌ ಜಿಲ್ಲೆಯಲ್ಲೂ  ಅನೇಕ ಪೌರಕಾರ್ಮಿಕರನ್ನು ಕೆಲಸದಿಂದ  ‌ ವಜಾಗೊಳಿಸಲಾಗಿದೆ ‌ಸ್ಥಳೀಯ‌ ಶಾಸಕರು‌ ಗಮನಹರಿಸುವಂತೆ‌ ಮನವಿ‌ಮಾಡಿದರು.
ಕಾರ್ಯಕ್ರಮದಲ್ಲಿ  ಪೌರಾಯುಕ್ತ‌ ಆರ್ .ಕೃಷ್ಣಮೂರ್ತಿ, ‌ಪೌರಕಾರ್ಮಿಕರ  ಕ್ಷೇಮಾಭಿವೃದ್ದಿ ಸಂಘದ ಸಂಘದ ಗೌರವಾಧ್ಯಕ್ಷ ನಾಗರಾಜ್ ಹೆತ್ತೂರು, ಇಂಜಿನಿಯರ್ ‌ ಪ್ರವೀಣ್, ವ್ಯವಸ್ಥಾಪಕ ಪ್ರಕಾಶ್, ಆರೋಗ್ಯ ನಿರೀಕ್ಷಕ ಆಧೀಶ್, ರಂಜನ್ , ಸಂಘದ ಲೋಕೇಶ್ , ಕಾರ್ಯದರ್ಶಿ ಕೇಶವೇಗೌಡ,ಪರಿಸರ ಅಭಿಯತಂರಿ ಲೋಕೇಶ್ವರಿ ಇನ್ನಿತರ ಪೌರಕಾರ್ಮಿಕರು ಇದ್ದರು. ವಿವಿಧ ಪೌರಕಾರ್ಮಿಕರನ್ನು ಸನ್ಮಾನಿಸಿ‌ ಗೌರವಿಸಲಾಯಿತು.ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಛೇರಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್  ಪ್ರತಿಮೆಗೆ ಮಾಲಾರ್ಪಣೆ‌ ಮಾಡಿ ನಗರದ ಪ್ರಮುಖ‌ ಬೀದಿಗಳಲ್ಲಿ ‌ಮೆರವಣಿಕೆ‌‌ ನಡೆಸಲಾಯಿತು.